Friday, July 25, 2008

ಅನುವಾದ - ೧


ತೆಲುಗು ಭಾಷೆಯಲ್ಲಿ ಇತ್ತೀಚಿನ ಪೀಳಿಗೆ ಅವರು ಬರೆದ ಕೆಲವು ಒಳ್ಳೆಯ ಕವನಗಳನ್ನ ಕನ್ನಡ ಓದುಗರರಿಗಾಗಿ ನನಗೆ ಗೊತ್ತಿರುವ ಕನ್ನಡದಲ್ಲಿ ಅನುವಾದ ಮಾಡುತ್ತಾ ಇದ್ದೀನಿ. ಇವು ಓದುಗರರ ಮೆಚ್ಚಿಗೆ ಪಡದಿಲ್ಲವೆಂದರೇ ಅದು ನನ್ನ ಅನುವಾದ ಲೋಪವೇ ಸರಿ.

ತೆಲುಗು ಮೂಲ: ಮೂಲಾ ಸುಬ್ರಹ್ಮಣ್ಯಂ

ತೆಲುಗು ಶೀರ್ಷಿಕೆ: ಏಟಿ ಒಡ್ಡುನ (ನದಿಯ ದಡದಲ್ಲಿ)

ಕನ್ನಡಾನುವಾದ:

ಕೋಟಿ ಆಲೋಚೆನಗಳೊಂದಿಗೆ
ನದಿಯ ದಡದಲ್ಲಿ

ಎಲ್ಲಿಂದ ಬರುತ್ತದೆ ?
ಎಲ್ಲಿಗೆ ಹೋಗುತ್ತದೆ ?
ಹಿಂದಕ್ಕೆ ಏಕೇ ಪ್ರವಹಿಸೋದಿಲ್ಲ ?

ಬಲಿಯುತ್ತ ಇರುವ ಕತ್ತಲಿನಲ್ಲಿ
ಅನ್ವೇಷಣೆ ಮುಗಿಯದಲೇ
ನಿರ್ಷ್ಕಮಣೆ

ನದಿಯು ಇನ್ನೂ
ಹರಿಯುತ್ತಲೇ ಇದೇ


No comments: